ಉತ್ತರಪ್ರದೇಶದಲ್ಲಿ ರೈತರ ಏಳಿಕೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರೇಷ್ಮೆ ಉತ್ಪಾದನಾ ವ್ಯವಹಾರದೊಂದಿಗೆ ರೈತರನ್ನು ಸಂಪರ್ಕಿಸಬೇಕೆಂದು ಬಯಸಿದ್ದಾರೆ. ರೇಷ್ಮೆ ಕೃಷಿಯಿಂದ ರೈತರ ಆದಾಯವನ್ನು ಹೆಚ್ಚಿಸುವ ಮಾರ್ಗಗಳನ್ನು ಯೋಗಿ ಆದಿತ್ಯನಾಥ್ ವಿವರಿಸಿದರು. ಇದನ್ನು ಮಾಡಲು ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ವಾರಣಾಸಿಯಲ್ಲಿ ರೇಷ್ಮೆ ವಿನಿಮಯವನ್ನು ತೆರೆದಿದೆ. ಇದರೊಂದಿಗೆ ರೈತರ ಹೆಚ್ಚುವರಿ ಆದಾಯಕ್ಕಾಗಿ ಈ ಬಗ್ಗೆ ಮಾತಣಾಡಿದ ಯೋಗಿ ಆದಿತ್ಯನಾಥ್, ಈ ರೇಷ್ಮೆ ಕೃಷಿಯಿಂದ ರೈತರು 80 ಸಾವಿರದಿಂದ 1-25 ಲಕ್ಷ ರೂಪಾಯಿ ಆದಾಯವನ್ನು ಪಡೆಯಬಹುದು. ಈಗಾಗಲೇ ಉತ್ತರ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ರೇಷ್ಮೆ ಉತ್ಪಾದನೆಯಾಗಿದೆ. ಇದನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥ್ ಅವರು ಹೆಚ್ಚಿನ ಪ್ರಮಾಣದಲ್ಲಿ ಹಿಪ್ಪುನೇರಳೆ ಬೆಳೆಯುವಂತೆ ರೈತರಿಗೆ ಸಲಹೆ ನೀಡಿದ್ದಾರೆ.