ಜೆಡಿಎಸ್ಅವಲೋಕನಾ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಂದ ನನ್ನ ಅಸ್ತಿತ್ವ ಕುಸಿತ ಆಗಿರೋದು. ನಾನು ಏನು ಸನ್ಯಾಸಿ ಅಲ್ಲ, ಕಾಂಗ್ರೆಸ್ನ 5 ಗ್ಯಾರಂಟಿಗಳೇ ನಮಗೆ ಅಸ್ತ್ರವಾಗಿದೆ. ಜನರು ಎಲ್ಲರಿಗೂ ಸಿಗುವ 5 ಗ್ಯಾರಂಟಿಗಳನ್ನು ನೋಡಿ ಕಾಂಗ್ರೆಸ್ಗೆ ಮತವನ್ನು ಹಾಕಿ ಗೆಲ್ಲಿಸಿದ್ದಾರೆ. ಮೊದಲು ಎಲ್ಲರಿಗೂ ಗ್ಯಾರಂಟಿ ಕೊಡ್ತೇವೆಂದು ಹೇಳಿ ಈಗ ಷರತ್ತುಗಳನ್ನು ಹಾಕುತ್ತಿದ್ದಾರೆ. ಕಾಂಗ್ರೆಸ್ ಕೊಟ್ಟಿರುವ ಗ್ಯಾರೆಂಟಿ ಈಡೇರಿಸಲ್ಲ. ಅದನ್ನು ಹಿಡಿದುಕೊಂಡೇ ಹಳ್ಳಿ ಹಳ್ಳಿಗಳಿಗೆ ಹೋಗುತ್ತೇವೆ. ಪ್ರತಿ ತಾಲ್ಲೂಕಿನಲ್ಲಿ ಈ ಬಗ್ಗೆ ಪ್ರತಿಭಟನೆ ಆಗಬೇಕು ಎಂದು ಹೇಳಿದರು.