ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದುಕೊಂಡು, ಸಂಪುಟ ಸೇರಲು ತುದಿಗಾಲಲ್ಲಿ ನಿಂತಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನ ಕೋರ್ಟ್ ಮುಂದೆ ಹಾಜರುಪಡಿಸಲು ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ. ಬಿ.ರಿಪೋರ್ಟ್ನಲ್ಲಿ ಉಲ್ಲೇಖಿಸಿರುವ ಸಾಕ್ಷಗಳ ಹಾಜರಿ, ಸಂತೋಷ್ ಪಾಟೀಲ್ರ 2 ಮೊಬೈಲ್ಗಳ ಡಾಟಾ, ಎಫ್ಎಸ್ಎಲ್ನಿಂದ ಬಂದ ಎಲ್ಲಾ ತಾಂತ್ರಿಕ ಸಾಕ್ಷ್ಯ, ಸಂತೋಷ್ ಮೃತದೇಹ ಸಿಕ್ಕ ಹೋಟೆಲ್ ಸಿಸಿಟಿವಿ ಫೂಟೇಜ್ ನೀಡಬೇಕು. ಅಲ್ಲದೆ, ಪೊಲೀಸರು ಮಾಡಿದ ವಿಡಿಯೋ ಹಾಗೂ ಅನ್ಎಡಿಟೆಡ್ ವಿಡಿಯೋಗಳನ್ನ ನೀಡುವಂತೆಯೂ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ. ಇವೆಲ್ಲಾ ಸಾಕ್ಷ್ಯಗಳನ್ನು ತನಿಖಾಧಿಕಾರಿಯೇ ಖುದ್ದು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಆದೇಶಿಸಲಾಗಿದ್ದು, ಜ.31 ರಂದು ತನಿಖಾಧಿಕಾರಿ ಕೋರ್ಟ್ ಮುಂದೆ ಹಾಜರಿ ಪಡಿಸಲು ದಿನಾಂಕ ನಗದಿಪಡಿಸಲಾಗಿದೆ.ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಸಂತೋಷ್ ಪಾಟೀಲ್ ಸಹೋದರ ಪ್ರಶಾಂತ್ ಪಾಟೀಲ್, ನ್ಯಾಯಾಲಯದ ಮೊರೆ ಹೋಗಿದ್ದರು. ತನಿಖೆ ವೇಳೆ ಅಸಲಿ ಸಾಕ್ಷ್ಯಗಳನ್ನ ಮರೆಮಾಚಿದ್ದಾರೆ. ಎಫ್ಎಸ್ಎಲ್ನಿಂದ 70000 ಡಾಟಾ ನೀಡಿದ್ದಾರೆ. ಆದ್ರೆ ಪೊಲೀಸರು ತಪ್ಪು ಮಾಹಿತಿ ನೀಡಿದ್ದಾರೆ. ಕೇವಲ 55000 ಡಾಟಾ ಬಂದಿದೆ ಎಂದು ಬಿ.ರಿಪೋರ್ಟ್ನಲ್ಲಿ ಉಲ್ಲೇಖಿಸಲಾಗಿದೆ. ಗುತ್ತಿಗೆದಾರಸಂತೋಷ ಪಾಟೀಲ್ ಈಶ್ವರಪ್ಪ ಪಿಎಗೂ 25 ಸಾವಿರ ಕೊಟ್ಟಿರುವುದಾಗಿ ವಾಟ್ಸಪ್ಚಾಟ್ ಸಿಕ್ಕಿದೆ ಪಿಎ ಸೇರಿ ಹಲವರಿಗೆ ಸಂತೋಷ ಪಾಟೀಲ್ ಕಮಿಷನ್ ಕೊಟ್ಟಿದ್ದರು. ಬಿಲ್ಕಮಿಷನ್ಅಂತ 4.15 ಲಕ್ಷ ಕೊಟ್ಟಿರುವುದಾಗಿ ವಾಟ್ಸಪ್ಚಾಟ್ನಲ್ಲಿ ಉಲ್ಲೇಖವಾಗಿದೆ..