ಡಿಕೆ ಶಿವಕುಮಾರ್ ಲೂಟಿ ಮಾಡೋದು ಬಿಟ್ಟರೆ ಅವರನ್ನು ನನ್ನ ತಮ್ಮನಾಗಿ ಸ್ವೀಕಾರ ಮಾಡ್ತೀನಿ: ಕುಮಾರಸ್ವಾಮಿ ಷರತ್ತು

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಕುಮಾರಸ್ವಾಮಿ ಟ್ವೀಟ್ ವಿಚಾರ ಇಟ್ಟುಕೊಂಡು ಮಾತನಾಡಿದ್ದ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ, ನಾನು ಟ್ವೀಟ್‌ನಲ್ಲಿ ನೀರು ಬಿಡಿ ಅಂತ ಹೇಳಿಲ್ಲ. ನನ್ನ ಟ್ವೀಟ್‌ನಲ್ಲಿ ಅಣ್ಣ-ತಮ್ಮಂದಿರ ರೀತಿ ಇರಬೇಕು ಅಂತ ಹೇಳಿದ್ದೇನೆ. ಕಾನೂನು ವ್ಯಾಪ್ತಿಯಲ್ಲಿ ಇದಕ್ಕೆ ಪರಿಹಾರ ಸಿಗಲ್ಲ. ಹೀಗಾಗಿ ಕೊಟ್ಟು ತೆಗೆದುಕೊಳ್ಳಬೇಕು ಎಂದು ಹೇಳಿದ್ದೇನೆ. ತಮಿಳುನಾಡು ರೈತರಿಗೆ ನಮ್ಮ ರೈತರು ಅನ್ಯಾಯ ಮಾಡಿಲ್ಲ. ನಮ್ಮ ರೈತರಿಗೆ ಅನ್ಯಾಯ ಮಾಡಬೇಡಿ ಎಂದು ಹೇಳಿದ್ದೇನೆ. ಇದನ್ನು ಹೇಳಿದ್ದು ತಪ್ಪಾ? ನಾನು ನೀರು ಬಿಡುತ್ತೇನೆ ಎಂದು ಹೇಳಿರಲಿಲ್ಲ ಎಂದು ತಿರುಗೇಟು ನೀಡಿ. ಸುಳ್ಳು ಹೇಳಿಕೊಂಡು ಎಷ್ಟು ದಿನ ರಾಜಕೀಯ ಮಾಡುತ್ತಿರಾ? ಉಡಾಫೆ ರಾಜಕೀಯ ಮಾಡಬೇಡಿ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೀರಾ. ಮಾತ್ತೆತ್ತಿದರೆ ಪೆನ್ನು ಕೊಡಿ ಪೆನ್ನು ಕೊಡಿ ಎಂದು ಕೇಳುತ್ತಿದ್ದರು. ನಮ್ಮ ರೈತರನ್ನು ಕಡೆಗಣಿಸಿ ಬೇರೆ ಯಾರನ್ನೋ ಮೆಚ್ಚಿಸೋಕೆ ಪೆನ್ನು ಕೇಳಿದ್ರಾ? ಹುಡುಗಾಟ ಆಡಬೇಡಿ. ರಾಜ್ಯ ಲೂಟಿ ಮಾಡುವುದನ್ನು ನಿಲ್ಲಿಸಿ. ಅಣ್ಣನಾಗಿ ನನ್ನ ಈ ಸಲಹೆ ಸ್ವೀಕಾರ ಮಾಡಿ. ನಾನು ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ಲೂಟಿ ಹೊಡೆಯೋದು ಬಿಡಿ ಎಂಬ ನನ್ನ ಸಲಹೆ ಸ್ವೀಕಾರ ಮಾಡಿ. ಇನ್ನು 15 ವರ್ಷ ನೀವೇ ಅಧಿಕಾರ ಮಾಡಿ ಎಂದು ಸಲಹೆ ಕೊಟ್ಟರು. ತಮ್ಮನಾಗಿ ಅಣ್ಣನ ಮಾತು ಕೇಳಿ. ಇಲ್ಲಿಯವರೆಗೂ ಲೂಟಿ ಹೊಡೆದಿರೋದು ಸಾಕು. ಇನ್ನು ಲೂಟಿ ಹೊಡೆಯೋದು ನಿಲ್ಲಿಸಿ. ಜನರ ಬದುಕನ್ನು ಕಟ್ಟಿ ಕೊಡಪ್ಪ. ಇನ್ನು 10 ವರ್ಷ ನೀವೆ ಡಿಸಿಎಂ, ಸಿಎಂ ಆಗಿ ಇದ್ದು ಬಿಡಿ. ಲೂಟಿ ಹೊಡೆಯೋದನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಮಾಡಿ. ಈ ಸಲಹೆಯನ್ನು ಒಪ್ಪಿಕೊಂಡರೆ ನಾನು ಡಿಕೆ ಶಿವಕುಮಾರ್ ಅವರನ್ನು ತಮ್ಮ ಅಂತ ಒಪ್ಪಿಕೊಳ್ತೀನಿ ಎಂದು ಷರತ್ತು ವಿಧಿಸಿದರು.

Leave a Reply

Your email address will not be published. Required fields are marked *