ನಗರದಲ್ಲಿನ ರಸ್ತೆ ಗುಂಡಿಗಳ ಸಮಸ್ಯೆ ಯಿಂದಾಗಿ ನಿತ್ಯ ಒಂದಲ್ಲ ಒಂದು ಕಡೆ ಸಾವುನೋವುಗಳು ಸಂಭವಿಸುತ್ತಲೇ ಇವೆ. ಇದಕ್ಕೆ ರಸ್ತೆಗುಂಡಿಗಳ ಬಿಬಿಎಂಪಿ ಯ ಅಸಮರ್ಪಕ ನಿರ್ವಹಣೆಯೇ ಕಾರಣ ಬಿಬಿಎಂಪಿಯ ನಿರಂತರ ಭ್ರಷ್ಟಾಚಾರ ಹಾಗೂ ವೈಫಲ್ಯಗಳಿಂದ ಕೂಡಿದೆ. ಇಂತಹ ಸಂಸ್ಥೆ ನಮಗೇ ಬೇಕಾ? ಈ ಕಾರಣದಿಂದಲೇ ಬಿಬಿಎಂಪಿ ಕೇಂದ್ರ ಕಚೇರಿಗೆ ಬೀಗ ಜಡಿಯಲಿದ್ದೇವೆ ಎಂದು ಆಮ್ಆದ್ಮಿ ಪಕ್ಷದ (ಎಎಪಿ) ಮುಖಂಡರು ತಿಳಿಸಿದ್ದಾರೆ.