ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದಾಗುತ್ತಿರುವ ಸಾವು-ನೋವುಗಳ ನಡುವೆಯೂ ರಸ್ತೆ ಗುಂಡಿ ತುಂಬದ ಬಿಬಿಎಂಪಿ; ಗಡುವು ವಿಸ್ತರಣೆ

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದಾಗುತ್ತಿರುವ ಸಾವು ನೋವುಗಳು ಕಣ್ಣಿಗೆ ಕಾಣುತ್ತಲೆ ಇವೆ. ಆದರೂ ಮಾತ್ರ ಬಿಬಿಎಂಪಿ ಮಾತ್ರ ತನ್ನ ಕೆಲಸ ಮುಗಿಸುತ್ತಿಲ್ಲ. ಅಕ್ಟೋಬರ್ 30 ರಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರು ನವೆಂಬರ್ 5 ರೊಳಗೆ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ, ಈಗ ಮತ್ತೆ ಗಡುವು ವಿಸ್ತರಿಸಿಕೊಂಡಿದೆ.ನಗರದಲ್ಲಿ ಸುರಿದ ಮಳೆಯಿಂದಾಗಿ ರಸ್ತೆ ಗುಂಡಿಗಳನ್ನು ತುಂಬುವ ಕೆಲಸ ಮತ್ತಷ್ಟು ವಿಳಂಬವಾಗಿದೆ ನವೆಂಬರ್ 20ರ ಒಳಗೆ ಎಲ್ಲಾ ಗುಂಡಿಗಳನ್ನು ಮುಚ್ಚುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *