ಕೆಲವು ತಿಂಗಳುಗಳ ಹಿಂದೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯುನಿಂದ ಹೊರಬಂದ ಕುಶ್ವಾಹಾ ಅವರು ಹೊಸ ಚರ್ಚೆಯನ್ನು ಈ ಮೂಲಕ ಹುಟ್ಟುಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ದೆಹಲಿಯಲ್ಲಿ ನಿಗದಿಪಡಿಸಲಾದ ಎನ್ಡಿಎ ಸಭೆಯಲ್ಲಿ ಭಾಗವಹಿಸುತ್ತೀರಾ ಎಂದು ಕೇಳಿದಾಗ ತಮ್ಮ ಕಾರ್ಡ್ಗಳನ್ನು ಪ್ರದರ್ಶಿಸಿದರು.ಸಭೆಗೆ ತಮ್ಮ ರಾಷ್ಟ್ರೀಯ ಲೋಕ ಜನತಾ ದಳಕ್ಕೆ ಆಹ್ವಾನ ನೀಡಲಾಗಿದೆ ಎಂಬ ವರದಿಗಳ ಕುರಿತು ಕೇಳಿದ ಪ್ರಶ್ನೆಗೆ, ಕುಶ್ವಾಹಾ “ಎಲ್ಲವನ್ನೂ ಮಾಧ್ಯಮಗಳಲ್ಲಿ ಬಹಿರಂಗಪಡಿಸುವ ಅಗತ್ಯವಿಲ್ಲ, ಎಲ್ಲ ನಾಯಕರು ಮತ್ತು ಪಕ್ಷಗಳು ತಮ್ಮ ಪರವಾಗಿ ಮಾತ್ರ ಮಾತನಾಡಬಲ್ಲವು, ನಾನು ಎನ್ಡಿಎಯಲ್ಲಿರಲಿ ಅಥವಾ ಇಲ್ಲದಿರಲಿ ಇದು ನಾನು ಮಾಧ್ಯಮಗಳ ಮುಂದೆ ಚರ್ಚಿಸಬೇಕಾದ ವಿಷಯವಲ್ಲ. ಬೆಂಗಳೂರಿನಲ್ಲಿ ವಿಪಕ್ಷಗಳ ಸಭೆ ನಡೆಯುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ನರೇಂದ್ರ ಮೋದಿ ಅವರನ್ನು ಬಿಟ್ಟರೆ ಬೇರೇ ಯಾವ ಅಭ್ಯರ್ಥಿಯು ಪರ್ಯಾಯವಾಗಿ ಇಲ್ಲ ಎಂದು ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹಾ ಅವರು ಹೇಳಿದ್ದಾರೆ.